ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಚರ್ಮ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ(KCLDCL) ತಂದಿರೋ ವಿಶೇಷ ಯೋಜನೆ – ನೇರ ಸಾಲ ಯೋಜನೆ, ಪರಿಶಿಷ್ಟ ಜಾತಿಯ ಮಾದಿಗ ಸಮುದಾಯದ ನಿರುದ್ಯೋಗಿಗಳಿಗೆ ಹೊಸ ಜೀವನದ ಆಶಾಕಿರಣವನ್ನೂ, ಉದ್ಯೋಗದ ಬಾಗಿಲನ್ನೂ ತೆರೆದಿದೆ.
ಈ ಯೋಜನೆಯ ಉದ್ದೇಶ ಸ್ಪಷ್ಟ – ಸ್ವಯಂ ಉದ್ಯೋಗವನ್ನು ಪ್ರೋತ್ಸಾಹಿಸಿ, ಬದುಕಿಗೆ ಬಲ ನೀಡುವುದು. ಸಣ್ಣ ವ್ಯಾಪಾರ ಪ್ರಾರಂಭಿಸಲು ಹಣದ ಕೊರತೆಯಿರುವವರಿಗೆ ಇದು ಅಪೂರ್ವ ಅವಕಾಶವಾಗಿದೆ.
ಯಾರು ಅರ್ಹರು :
– ಅರ್ಜಿದಾರನು ಪರಿಶಿಷ್ಟ ಜಾತಿಯ ಮಾದಿಗ ಸಮುದಾಯಕ್ಕೆ ಸೇರಿರಬೇಕು.
– 18 ರಿಂದ 50 ವರ್ಷ ವಯಸ್ಸಿನೊಳಗಿನ ಪುರುಷರು ಮತ್ತು ಮಹಿಳೆಯರು ಅರ್ಜಿ ಹಾಕಬಹುದು.
– ವಾರ್ಷಿಕ ಕುಟುಂಬ ಆದಾಯ: ಗ್ರಾಮೀಣ ಪ್ರದೇಶದಲ್ಲಿ ₹1.5 ಲಕ್ಷ, ನಗರದಲ್ಲಿ ₹2 ಲಕ್ಷಕ್ಕಿಂತ ಕಡಿಮೆ ಇರಬೇಕು.
– ಅರ್ಜಿದಾರ ಅಥವಾ ಅವರ ಕುಟುಂಬದ ಸದಸ್ಯರು ಸರ್ಕಾರದಿಂದ ಈಗಾಗಲೇ ₹1 ಲಕ್ಷಕ್ಕಿಂತ ಹೆಚ್ಚು ಸೌಲಭ್ಯ ಪಡೆದಿರಬಾರದು.
– ಸರ್ಕಾರಿ ಉದ್ಯೋಗದಲ್ಲಿರುವವರ ಕುಟುಂಬದ ಸದಸ್ಯರು ಅರ್ಹರಲ್ಲ.
– ಸ್ವಂತ ಜಾಗ ಅಥವಾ ಘಟಕ ಸ್ಥಾಪನೆಗೆ ಬೇಕಾದ ಸ್ಥಳ ಇರಬೇಕು.
ಸೌಲಭ್ಯಗಳೇನು?
ಒಟ್ಟು ರೂ. 1,00,000/- ಧನ ಸಹಾಯ:
– ₹50,000/- ಮುಕ್ತ ಸಹಾಯಧನ (ಸಬ್ಸಿಡಿ)
– ₹50,000/- ಕಡಿಮೆ ಬಡ್ಡಿದರದ ಸಾಲ (ಶೇ. 4ರ ಬಡ್ಡಿ, 30 ಕಂತುಗಳಲ್ಲಿ ಮರುಪಾವತಿ)
ಇನ್ನೊಂದು ಆಯ್ಕೆ:ಹೆಚ್ಚು ಲಾಭದಾಯಕ ಚಟುವಟಿಕೆಗಳಿಗಾಗಿ ₹25,000 ಸಹಾಯಧನ + ₹25,000 ಸಾಲ.
ಯಾವ ಉದ್ಯಮಗಳಿಗೆ ಪ್ರೋತ್ಸಾಹ :
– ಪೆಟ್ಟಿಗೆ ಅಂಗಡಿ
– ಸಿದ್ಧ ಉಡುಪು ಅಂಗಡಿ
– ಕುರಿ, ಮೇಕೆ, ಕೋಳಿ, ಹಂದಿ ಸಾಕಣೆ
– ಹಣ್ಣು-ತರಕಾರಿ ಮಾರಾಟ
– ಮೀನು ಮಾರಾಟ
– ಟೈಲರಿಂಗ್
– ಹ್ಯೆನುಗಾರಿಕೆ, ಮೊಲ ಸಾಕಣೆ
– ಇತರೆ ಸಣ್ಣ ಕೈಗಾರಿಕೆಗಳು
ಅರ್ಜಿಯ ವಿಧಾನ :
1. ಸೇವಾ ಸಿಂಧು ಪೋರ್ಟಲ್ ([https://sevasindhu.karnataka.gov.in/Sevasindhu/Kannada](https://sevasindhu.karnataka.gov.in/Sevasindhu/Kannada)) ಗೆ ಭೇಟಿ ನೀಡಿ
2. “ಇಲಾಖೆ ಮತ್ತು ಸೇವೆಗಳು” > “ಸಮಾಜ ಕಲ್ಯಾಣ ಇಲಾಖೆ” > “ನೇರ ಸಾಲ ಯೋಜನೆ” ಆಯ್ಕೆಮಾಡಿ
3. “ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ” ಕ್ಲಿಕ್ ಮಾಡಿ
4. ನಿಮ್ಮ ಮಾಹಿತಿ, ಬ್ಯಾಂಕ್ ವಿವರ, ದಾಖಲೆಗಳನ್ನು ಭರ್ತಿ ಮಾಡಿ
5. ಅರ್ಜಿ ಸಲ್ಲಿಸಿ, ಅರ್ಜಿ ಐಡಿಯನ್ನು ಪಡೆದುಕೊಳ್ಳಿ.
ದಾಖಲೆಗಳು :
-ಭಾವಚಿತ್ರ
– ಜಾತಿ ಮತ್ತು ಆದಾಯ ಪ್ರಮಾಣಪತ್ರ
– ಪಡಿತರ ಚೀಟಿ
– ಗುರುತಿನ ಚೀಟಿ (ಆಧಾರ್/ಮತದಾರ ಗುರುತು ಇತ್ಯಾದಿ)
– ತರಬೇತಿ ಪ್ರಮಾಣಪತ್ರ (ಇದಿದ್ದರೆ)
– ದರಪಟ್ಟಿ ಹಾಗೂ ಯೋಜನಾ ವರದಿ.
ಸಂಪರ್ಕಿಸಿ :
ಕಾರ್ಯಾಲಯ ವಿಳಾಸ:
ನಂ.10, 3ನೇ ಮಹಡಿ, ಖಾದಿ ಭವನ, ಜಸ್ಮಾ ದೇವಿ ಭವನ ರಸ್ತೆ, ವಸಂತನಗರ, ಬೆಂಗಳೂರು-560052
ಇಮೇಲ್: [mdkmvstdc@gmail.com](mailto:mdkmvstdc@gmail.com)
ದೂರವಾಣಿ: 080-29901193
ಸಹಾಯವಾಣಿ:9482300400 / 8277799990.
ಸ್ವಯಂ ಉದ್ಯೋಗದ ಕನಸು ಹೊತ್ತವರಿಗೆ ಇದು ಒಳ್ಳೆಯ ಅವಕಾಶ. ನಿಮ್ಮ ಉದ್ಯಮದ ಬುನಾದಿಗೆ ಸರ್ಕಾರದ ಬೆಂಬಲ ಬೇಕಾ? ‘ನೇರ ಸಾಲ ಯೋಜನೆ’ ದಾರಿ ತೋರಿಸುತ್ತದೆ!